ಬದಲಾಗಿದೆ ಕಾಲ

ಅಪ್ಪ, ನೆನಪಾಗಿದೆ ಈಗ
ರಜೆಯ ಮಜಾ ಗೋತಾ
ಮೂಲೆಯಲ್ಲೆಸೆದ ಪಾಟಿಚೀಲ
ತಳಮಳ ಜೋತು ಬೀಳುವ
ಹೆಗಲುಗಳ ನೆನೆದು
ಸಮವಸ್ತ್ರ, ಬೂಟುಗಳ ಒಳಗೆ
ಪೀಚಲು ಮತ್ತೆ ಅಪರೂಪಕ್ಕೆ
ಟೊಣಪ ದೇಹದ ಸೈನಿಕರ
ಕವಾಯತು ಮುಂಜಾನೆ
ಇದೆಲ್ಲ ಬದಲಾಗಬೇಕು

ಅದೊಂದೆ ಆಸೆ ಅಪ್ಪ
ಎಲ್ಲ ಹೊಸದಾಗಬೇಕು
ಬಳಪ ಮೂಡದ ಕರಿಹಲಗೆ
ಧೂಳಡರಿದ ಡುಬ್ಬೊಟ್ಟೆ ನಾಯಕ
ಕಿರಿಕಿರಿ ಕೊರೆತ ಕಾಂಡಗಳು
ಅವಧಿಗೊಂದಾವರ್ತಿ
ಕಾಲ ಬದಲಾಗಿದೆ.

ಓದುವ ಆಟ, ಕಲಿ-ನಲಿ
ಮತ್ತೆ ನಲಿ-ಕಲಿ
ಗೂಡು ಕಟ್ಟುವ ಗೊಂದಲ
ಒತ್ತಾಯದಿ ಉಣಿಸಿ ಮತ್ತೆ
ಕಕ್ಕಿಸುವ ಕಲಿಕೆ
ಔಪಚಾರಿಕ ಲೇಪನ
ಸೃಜನಶೀಲತೆ ಮರಣ
ಬದಲಾಗಬೇಕು.

ಸ್ಮಾರ್ಟ ಕ್ಲಾಸುಗಳಲಿ ಕಲಿತು
ಸ್ಮಾರ್ಟಾಗಬೇಕು
ಟ್ರಯಲ್ ಎಂಡ ಎರರ್ ವಿಧಾನದಿ
ಟ್ರಿಮ್ ಆಗಬೇಕು
ನನಗೆ ನಾನೇ ಕಲಿಯಬೇಕು
ನಾನೇ ನನ್ನ ಗುರುವಾಗಬೇಕು
ಕಾಲ ಬದಲಾಗಿದೆ
ಎಲ್ಲ ಬದಲಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ?
Next post ಟ್ರಾನ್ಸಾಲ್ಪಿನೋ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys